ರೂಹು

ಬಣ್ಣಬಣ್ಣ ಮುಗಿಲ ಮೈತುಂಬ
ಹೂವರಳಿದ ಸಿರಿಸಂಜೆ ಮೋಡದಂಚಿಗೆ
ಜರಿಯ ಅಂಚು ಮೆದು ಮಲ್ಲಿಗೆ
ಅಂಗಳದ ಮೂಲೆಯಲಿ ಸೂಸಿದ ಕಂಪು
ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ.

ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ
ಮೊಗ್ಗಾಗಿ ತಿಳಿಗಾಳಿ ತೀಡಿ ಕೈಯಿಂದ
ಮನಸ್ಸಿಗೆ ತೇಲಿದ ಗಾಳಿಪದ ಅಲ್ಲಿ
ಬಂಗಾರ ಗೌರಿಶಂಕರ ಶಿಖರ ಕವಿತೆ
ಭಾವದ ಪಣತಿಯಲ್ಲಿ ಉರಿಯುವ ಬತ್ತಿ.

ಹೊನ್ನ ಮುಡಿಯಲಿ ಸೇವಂತಿಗೆ ಜಾಜಿ
ದಿಕ್ಕು ದಿಕ್ಕುಗಳಿಗೆಲ್ಲಾ ಕಸ್ತೂರಿ ಚಂದನ ಸೂಸಿ
ನೊರೆತೆರೆಗಳು ಏರಿದ ಕಡಲ ಒಡಲಲಿ
ಉಯ್ಯಾಲೆ ಜೇಕುವ ಹಾಯಿ ದೋಣಿ
ಹುಟ್ಟು ಹಾಕಿದ ಹೊಸ ಬಗೆಯ ಬಂಧ

ನನ್ನೊಳಗೆ ನಿನ್ನೊಳಗೆ ಇರುವ ಭಾನು
ಭೂಮಿ ಬಯಲು ಆಲಯ ಸಪ್ತಾಂತರಾಳ
ಬೇರು ಇಳಿದ ಹರವನಲಿ ಟೊಂಗೆ ಚಾಚಿದ
ದಿಗಂತ ಕತ್ತಲಾಯಿತು ಬೆಳಕಾಯಿತು
ಬೀಜದಲಿ ರೂಹುಗೊಂಡ ಅಖಂಡ ಸಂಸಾರ ಸಂಬಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ ಕಲ್ಪನೆ
Next post ಜನರ ಬಾಯಿ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys